ನಾವು ಚಿಕ್ಕವರಿದ್ದಾಗ, ಎಷ್ಟೋವೇಳೆ ಕರ್ತೃ ಯಾರೆಂದು ತಿಳಿಯದಿದ್ದರೂ, ಅವರ ಕೃತಿಯ ಕೆಲವು ಪದ್ಯಗಳನ್ನ ಬಾಯಿ ಪಾಠ ಮಾಡುತಿದ್ದುದು ಉಂಟು. ಅಂಥಹ ಪದ್ಯಗಳಲ್ಲಿ ಒಂದು, ಕುಮಾರವ್ಯಾಸ ರಚಿಸಿರುವ ಕರ್ನಾಟಕ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತದ ಮೊದಲನೇ ಪದ್ಯವನ್ನು ಇಲ್ಲಿ ಕೊಡಲಾಗಿದೆ.
ಶ್ರೀ ವನಿತೆಯರಸನೆ ವಿಮಲರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರದಾತಾರ
ರಾವಣಾಸುರ ಮಥನ ಶ್ರವಣಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಾಯಣ