ಅಲ್ಲಾಡುವ ಹಲ್ಲಿನ ಮೇಲೆ ಹಲಗೆ ಬಿದ್ದಂತೆ
ಎಮ್ಮೆಗೆ ಎರಡು ಕೋಡು, ಹೆಮ್ಮೆಗೆ ಎಂಟು ಕೋಡು
ಓರಳಲ್ಲಿ ಕೂತರೆ ಒನಕೆ ಪೆಟ್ಟು ತಪ್ಪೀತೇ?
ಕಡು ಕೋಪ ಬಂದಾಗ ತಡಕೊಂಡವನೆ ಜಾಣ
ಕಪ್ಪೆ ಕೂಗಿ ಮಳೆ ಬರಿಸಿದ ಹಾಗೆ
ಕದ್ದು ಮದುವೆ ಆಗ್ತೀನಿ, ಬಗ್ಗಿ ಓಲಗ ಊದು
ಕಬ್ಬಿಣದ ಗಡಾರಿ ನುಂಗಿ ಶುಂಠಿ ಕಷಾಯ ಕುಡಿದ ಹಾಗೆ
ಕರಡಿ ಕೈಗೆ ಹೆದರದವ ಕರಿಕಂಬಳಿಗೆ ಹೆದರ್ಯಾನೆ?
ಕಾಡಲ್ಲಿ ಹೊಂಬಾಲೆ ಬಯಸಿದ ಹಾಗೆ
ಕಾಸಿಗೆ ಒಂದು ಸೀರೆಯಾದರೂ ನಾಯಿ ಮೈ ಬೆತ್ತಲೆ
ಕಿಚ್ಚೆದ್ದಾಗ ಬಾವೀ ತೋಡಿದ
ಕಿಟಕಿಯಿಂದ ನುಸುಳುವವ, ಹೆಬ್ಬಾಗಿಲಿನಿಂದ ಬಾರನೆ?
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಕುರುಬನ ಮಂದೆ ತೋಳ ಕಾದ ಹಾಗೆ
ಕೂಳು ಚೆಲ್ಲಿದ ಕಡೆ ಸಾವಿರ ಕಾಗೆ
ಕೋಟಿ ವಿದ್ಯೆಯೂ ಕೂಳಿಗೊಸ್ಕರವೇ
ಗಂಗೆಗೆ ಹೋಗಿ ತೆಂಗಿನ ಓಟೆ ತಂದ ಹಾಗೆ
ಗುರುವಿನಂತೆ ಶಿಷ್ಯ, ತಂದೆಯಂತೆ ಮಗ
ಚರ್ಮ ತೊಳೆದರೆ ಕರ್ಮ ಹೋದೀತೆ?
ಚಾಡಿಕೋರನಿಗೆ ಊರೆಲ್ಲ ನೆಂಟರು
ಚಿಂತೆಯೇ ಮುಪ್ಪು, ಸಂತೋಷವೇ ಯೌವನ
ಚೇಳಿನ ಮಂತ್ರವನ್ನರಿಯದವನ ಹಾವಿನ ಹುತ್ತಕ್ಕೆ ಕೈಯಿಕ್ಕಿದ ಹಾಗೆ
ಜೋಗಿಗೆ ಜೋಗಿ ತಬ್ಬಿಕೊಂಡರೆ ಮೈಯೆಲ್ಲಾ ಬೂದಿ
ತರ್ಕಾ ಮಡುವವ ಮೂರ್ಖನಿಗಿಂತ ಕಡೆ
ತಾ ಕಳ್ಳನಾದರೆ ಪರರ ನಂಬ
ತೀರಕ್ಕೆ ಬಂದ ಮೇಲೆ ತೆರೆಯ ಭಯವೇ?
ತುಂತುರು ಮಳೆಯಿಂದ ತೂಬಿನಕೆರೆ ತುಂಬೀತೆ?
ದೇವರ ಮಗನಾದರೂ ಮಾಡಿದ್ದೇ ಉಣ್ಣಬೇಕು
ಪ್ರಾಯ ಹೆಚ್ಚಾದರೂ ಬಾಯಿ ಚೆಂದಾಗಿರಬೇಕು
ಬಂದ ದಿವಸ ನಂಟ, ಮರುದಿವಸ ಭಂಟ, ಮೂರನೇ ದಿವಸ ಕಂಟ
ಬಗ್ಗಿಕೊಂಡು ಉತ್ತರೆ ಕಂದಾಯ ತಪ್ಪುತ್ತದೆಯೆ?
ಬಲೆಗೆ ಸಿಕ್ಕದ್ದು ಕೋಲಿಗೆ ಸಿಕ್ಕೀತೆ?
ಬಾಳೆ ಹಣ್ಣಿಗೆ ಗರಗಸವೇಕೆ?
ಬೇರು ಬಲ್ಲಾತನಿಗೆ ಎಲೆ ತೋರಿಸಬೇಕೆ?
ಬೋರೆಗಿಡದಲ್ಲಿ ಕಾರೆ ಹಣ್ಣಾದೀತೆ?
ಬಾವೀ ನೀರಾದರೆ ಭಾವಿಸಿದರೆ ಬಂದೀತೆ?
ಭೋಗಿಗೆ ಯೋಗಿ ಮರುಳು, ಯೋಗಿಗೆ ಭೋಗಿ ಮರಳು
ಮಠಪತಿಯಾದರೂ ಶಠಪತಿ ಬಿಡಲಿಲ್ಲ
ಮಡಕೆ ಒಡೆಯುವುದಕ್ಕೆ ಅಡಿಕೆ ಮರ ಬೇಕೆ?
ಮಣ್ಣು ದೇವರಿಗೆ ಮಜ್ಜನವೇ ಸಾಕ್ಷಿ
ಮಣ್ಣು ಕುದುರೆ ಏರಿ ನದಿ ದಾಟಿದಂತೆ
ಮನೆ ದೀಪವಾದರೆ ಮುತ್ತು ಕೊಡಬಹುದೇ?
ಮಳೆಗೆ ಹೆದರಿ ಹೊಳೆಗೆ ಬಿದ್ದ ಹಾಗೆ
ಮಾತು ಬಂದಾಗ ಸೋತು ಹೋದವನೇ ಜಾಣ
ಮೀನು ನೀರಿನಲ್ಲಿ ಮುಳುಗಿದರೆ ಸ್ನಾನದ ಫಲ ಬಂದೀತೇ?
ಮೂವರ ಕಿವಿಗೆ ಮುಟ್ಟಿದ್ದು, ಮೂರು ಲೊಕಕ್ಕೆ ಮುಟ್ಟುವುದು
ಮೆಚ್ಚಿದವನಿಗೆ ಮಸಣವೇ ಸುಖ
ಮೆಟ್ಟಿದಲ್ಲದೆ ಹಾವು ಕಡಿಯದು
ಮೊಗೇ ಮಾಡದ ಕುಂಬಾರ ಗುಡಾನ ಮಾಡಾನೆ?
ಯಾವ ರಾಯನಿಗೆ ರಾಜ್ಯವಾದರೂ ರಾಗಿ ಬೀಸೋದು ತಪ್ಪದು
ಲೋಕದವರೆಲ್ಲಾ ಸತ್ತರೆ ಶೋಕ ಮಾಡುವರ್ಯಾರು?
ವೈರೈದ್ದವನಿಂದ ಕ್ಷೌರ ಮಾಡಿಸಿಕೊಂಡ ಹಾಗೆ
ಶಕ್ತಿಯಿದ್ದವನಾದರೂ ಯುಕ್ತಿಯಿದ್ದವನ ಕೆಳಗೆ
ಶಾಪ ಕೊಡುವವ ಪಾಪಕ್ಕೆ ಹೆದರ್
ಶ್ವಾನದ ಮುಂದೆ ಹಾಡು ಹಾಡಿದ ಹಾಗೆ
ಸತ್ತ ಕುರಿ ಕಿಚ್ಚಿಗೆ ಅಂಜೀತೇ?
ಸತ್ಯವಿದ್ದರೆ ಎತ್ತಲೂ ಭಯವಿಲ್ಲ
ಸಮುದ್ರದ ಮುಂದೆ ಅರವಟಿಗೆ
ಸಮುದ್ರದ ದೊಡ್ಡದಾದರೂ ಪಾತ್ರೆ ಇದ್ದಷ್ಟೇ ನೀರು ಸಿಕ್ಕೀತು
ಹೊಳೆಗೆ ನೆನೆಯದ ಕಲ್ಲು, ಮಳೆಗೆ ನೆನೆದೀತೇ?
ಹೋಗದ ಊರಿಗೆ ದಾರಿ ಕೇಳಿದ ಹಾಗೆ
Read Full Post »