ಕೃತಿ: ಮಂಕುತಿಮ್ಮನ ಕಗ್ಗ ಕವಿ: ಡಿ.ವಿ.ಗುಂಡಪ್ಪ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಬೇಕೆಂದ ಕಡೆಗೋಡು ಪದಕುಸಿಯೇ ನೆಲವಿಹುದು ಮಂಕುತಿಮ್ಮ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ ಎಲ್ಲರೊಳಗೊಂದಾಗು – ಮಂಕುತಿಮ್ಮ ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಅಕ್ಕರದ ವಿದ್ಯೆಗದು ಮೊದಲಿಗನದಾರು ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ ದಕ್ಕುವುದೇ ಜಸ ನಿನಗೆ ಮಂಕುತಿಮ್ಮ ನಗುವು ಸಹಜದ ಧರ್ಮ [...]
ಕವಿ : ರಾಜರತ್ನಂ ಎಂಡಾ ಎಡತಿ ಕನ್ನಡ್ ಪದ್ಗೊಳ್ ಅಂದ್ರೆ ರತ್ನಂಗ್ ಪ್ರಾಣ ಬುಂಡೇನೆತ್ತಿ ಕುಡಿದ್ ಬುಟ್ಟಾಂದ್ರೆ ತಕ್ಕೊ ಪದ್ಗೊಳ್ ಬಾಣ ಭಗವಂತೇನ್ರಾ ಭೂಮಿಗಿಳ್ದು ನಮ್ತಾಕ್ ಬಂದಂತಾನ್ನು ಪರ್ ಗಿರಿಕ್ಷೆ ಮಾಡ್ತಾನವ್ನು ಭಕ್ತನ್ ಮೇಲ್ ಅವನ್ ಕಣ್ಣು ಎಂಡಾ ಕುಡಿಯೊದ್ ಬುಟ್ಬುಡ್ ರತ್ನಾಂತ್ ಅವನೇನಾರಂದ್ರೆ ಮೂಗ್ ಮೂರ್ ಚೂರಾಗಿ ಮುರಸ್ಕೊಂತೀನಿ ದೇವರ್ ಮಾತ್ಗಡ್ ಬಂದ್ರೆ ಎಂಡ ಬುಟ್ಟೆ ಎಡ್ತೀನ ಬುಟ್ ಬುಡ್ ರತ್ನಂತ್ ಅವನೇನಾರಂದ್ರೆ ಕಳ್ದೊಯ್ತಂತ ಕುಣ್ದಾಡ್ತೀನಿ ದೊಡ್ದೊಂದ್ ಕಾಟಾ ತೊಂದ್ರೆ ಎಂಡಾ ಬುಟ್ಟೆ ಏಡ್ತಿ ಬುಟ್ಟೇ ಕನ್ನಡ್ [...]
ಕವಿ : ರಾಜರತ್ನಂ ಯೊಳ್ಕಳಕ್ ಒಂದೂರು ತಲೆಮ್ಯಾಗೊಂದು ಸೂರು ಮಲ್ಗಕೆ ಭೂಮ್ತಾಯಿ ಮಂಚ| ಕೈ ಇಡ್ದೋಳ್ ಪುಟ್ನಂಜಿ ನೆಗ್ನೆಗ್ತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪ್ರಪಂಚ|| ಅಗ್ಲೆಲ್ಲ ಬೆವರ್ಸುರ್ಸಿ ತಂದಿದ್ರಲ್ ಓಸಿಮುರ್ಸಿ ಸಂಜೇಲಿ ಉಳಿ ಯೆಂಡ ಕೊಂಚ | ಈರ್ತ ಮೈ ಜುಮ್ ಅಂದ್ರೆ ವಾಸ್ನೆ ಘಮ್ ಘಮ್ ಅಂದ್ರೆ ತುಂಬೊಯ್ತು ರತ್ನನ್ ಪ್ರಪಂಚ|| || ಯೊಳ್ಕಳಕ್ ಒಂದೂರು|| ದುಖ್ಖಿಲ್ಲ ದಾದಿಲ್ಲ ನಮ್ಗದ್ರಲ್ಲ್ ಪಾಲಿಲ್ಲ ನಾವ್ಕಂಡಿಲ್ಲ ತಂಚ ವಂಚ| ಆಕಾಶ್ದಲ್ಲಿ ಹಾರಾಡ್ತ ಕನ್ನಡ್ದಲ್ಲಿ ಪದವಾಡ್ತ ಬಾಳೊದೇ ರತ್ನನ್ [...]
ಕವಿ : ರಾಜರತ್ನಂ ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ ಭೂಮಿಯುದ್ದಕ್ ಬೊಗ್ಗಿಸ್ತೀನಿ ಎಂಡ ತುಂಬ್ಕೊಂಡ್ ಮೈನ ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ ಬುರ್ ಬುರ್ ನೊರೆ ಬಸಿಯೊ ಅಂತ ವಳ್ಳೆ ವುಳಿ ಎಂಡ ತರ್ತೀನ್ ನಂದು ಪ್ರಾರ್ಥನೆ ಕೇಳೋ ಸರ್ಸೊತಮ್ಮನ್ ಗಂಡಾ ಸರ್ಸೊತಮ್ಮ ಮುನಿಸ್ಕೊಂಡವ್ಳೆ ನೀನಾದ್ರ್ ವಸಿ ಎಳು ಕುಡುದ್ ಬುಟ್ಟಾಡ್ದ್ರೆ ತೊಲ್ತದಣ್ಣ ನಾಲ್ಗೆ ಬಾಳ ಗೋಳು ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ ಅಕ್ಸರನೆಲ್ಲಾ ಸರ್ಸೊತಮ್ಮ [...]
ಕವಿ : ಎಚ್.ಎಸ್.ವೆಂಕಟೇಶ ಮೂರ್ತಿ ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತವೊ ಅರಿತೆವೇನು ನಾವು ನಮ್ಮ ಅಂತರಾಳವ ಕಡಲ ಮೇಲೆ ಸಾವಿರಾರು ಮೈಲಿ ಸಾಗಿರು ನೀರಿನಾಳ ತಿಳಿಯಿತೇನು ಹಾಯಿ ದೊಣಿಗೆ ಸದಾ ಕಾಲ ತಬ್ಬುವಂತೆ ಮೇಲೆ ಬಾಗಿರು ಮಣ್ಣ ಮುಟ್ಟು ದೊರಕಿತೇನು ನೀಲಿ ಬಾನಿಗೆ ಸಾವಿರಾರು ಮುಖದ ಚೆಲುವ ಹಿಡಿದು ತೊರಿದೆ ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ
ಕವಿ: ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂತು ಬೇಲಿ ಸಾಲ ಮೀಟಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ… ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ… ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ [...]