Home > ಇತರೆ > ಬದುಕನ್ನು ಕಲಿಯುವ ರೀತಿ

ಬದುಕನ್ನು ಕಲಿಯುವ ರೀತಿ

ನಗರದ ಪ್ರಖ್ಯಾತ ಕಳ್ಳನಿಗೆ ಹೊಸ ಚಿಂತೆಯೊಂದು ಶುರುವಾಯಿತು. ತನ್ನ ಎಳೆಯ ಮಗ ಇನ್ನೂ ಕಳ್ಳತನವನ್ನು ಕಲಿಯುವುದರಲ್ಲಿ ಯಾವ ಆಸಕ್ತಿಯನ್ನೂ ತೋರಿರಲಿಲ್ಲ, ಹೀಗೆ ಮುಂದುವರೆದರೆ ತನ್ನ ಮರಣಾನಂತರ ಮಗ ಹೇಗೆ ಬದುಕಬಲ್ಲ, ಎಂಬ ಚಿಂತೆ ಕಾಡತೊಡಗಿತು.

ಒಂದು ದಿನ ರಾತ್ರಿ, ಕಳ್ಳತನಕ್ಕೆಂದು ಹೊರಡುವ ಮುನ್ನ ಕಳ್ಳ ತನ್ನ ಮಗನನ್ನು ತನ್ನ ಜೊತೆ ಕರೆದುಕೊಂಡು ಹೊರಟ. ನಗರದ ಮಧ್ಯ ಭಾಗದಲ್ಲಿದ್ದ ಸಾಹುಕಾರನೊಬ್ಬನ ಮನೆಯನ್ನು ದೋಚಲು, ಸಾಹುಕಾರನ ಮನೆಯ ಹಿಂಬಾಗದ ಪೊದೆಯಲ್ಲಿ ಅಪ್ಪ ಮಗ ಅವಿತು ಕುಳಿತು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ರಸ್ತೆಯಲ್ಲಿನ ಸಂಚಾರ ಕಡಿಮೆಯಾಗಿ, ಸಾಹುಕಾರನ ಮನೆಯಲ್ಲಿನ ಎಲ್ಲರೂ ನಿದ್ರೆಯಲ್ಲಿ ಮಲಗಿರುವುದನ್ನು ಖಾತ್ರಿ ಪಡಿಸಿಕೊಂಡ ನಂತರ, ಅಪ್ಪಾ ಮಗ ಇಬ್ಬರೂ ಸೇರಿ, ಮನೆಯ ಹೊರಗಡೆ ಒಂದು ಸಣ್ಣ ಸುರಂಗವನ್ನು ತೋಡಲಾರಂಭಿಸಿದರು. ಬಹಳ ಕಷ್ಟ ಪಟ್ಟು ಸುರಂಗವನ್ನು ಮನೆಯ ಒಳಗೆ ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮನೆಯ ಒಳಗೆ, ಚಿನ್ನ, ಬೆಳ್ಳಿ, ವಜ್ರ, ಮುತ್ತು, ಹವಳ, ರಾಶಿ ರಾಶಿ ಬಿದ್ದಿದ್ದವು. ಅಪ್ಪ ತನ್ನ ಕೈಗೆ ಸಿಕ್ಕಿದ್ದಷ್ಟನ್ನು ದೋಚಿ ಕೊಂಡು, ಮೆಲ್ಲಗೆ ಸದ್ದಾಗದ ಹಾಗೆ ಸುರಂಗದ ಬಳಿಗೆ ಬಂದನು. ಮಗ ಇನ್ನು ಕೈಗೆ ಸಿಕ್ಕಿದ್ದನ್ನು ತುಂಬಿಕೊಳ್ಳುವುದರಲ್ಲೇ ಮಗ್ನನಾಗಿದ್ದು, ಅಪ್ಪ ಹೋದದ್ದು ಅವನ ಗಮನಕ್ಕೆ ಬರಲೇ ಇಲ್ಲಾ. ತನ್ನ ಚೀಲ ಎತ್ತಿಕೊಂಡು ಹೊರಡಲು ನೋಡುತ್ತಾನೆ, ಅಪ್ಪ ಅಲ್ಲಿ ಇರಲಿಲ್ಲ. ಅಷ್ಟರಲ್ಲಿ ಹೊರಗಡೆ ತನ್ನ ಅಪ್ಪ ಜೋರಾಗಿ ಕೂಗಿ ಎಲ್ಲರನ್ನು ಏಳಿಸಲು ಪ್ರಯತ್ನಿಸುತಿದ್ದುದನ್ನು ಕೇಳಿ ಮಗನಿಗೆ ತುಂಬಾ ಕೋಪಾ ಬಂತು. ಅದರ ಬಗ್ಗೆ ಏನೂ ಮಾಡುವಂತಿರಲಿಲ್ಲ ವಾದರೂ, ತನ್ನಲ್ಲೇ ಧೈರ್ಯ ತಂದು ಕೊಂಡು ಇಲ್ಲಿಂದ ಪಾರಾಗುವ ಬಗ್ಗೆ ಆಲೋಚಿಸಲಾರಂಭಿಸಿದ.

ಸದ್ದು ಗದ್ದಲದಿಂದ ಎಚ್ಚರ ಗೊಂಡ ಸಾಹುಕಾರ, ಕಳ್ಳನನ್ನು ಹುಡುಕಾಲು ಆರಂಭಿಸಿದ್ದು ಮಗನ ಅರಿವಿಗೆ ಬಂತು. ಮಗ ಸುತ್ತಲೂ ಗಮನಿಸಿದ, ಅಲ್ಲೊಂದು ದೊಡ್ಡ ಖಾಲಿ ಪೆಟ್ಟಿಗೆ ಬಾಯಿ ತೆರೆದಿತ್ತು. ತಟ್ಟನೆ ಹೋಗಿ ಅದರೊಳಗೆ ಕುಳಿತು, ಸದ್ದಾಗದಂತೆ ಮೆಲ್ಲಗೆ ಪೆಟ್ಟಿಗೆಯ ಬಾಯಿ ಮುಚ್ಚಿ ಒಳಗೆ ಸದ್ದು ಮಾಡದೆ ಕುಳಿತ.

ಸಾಹುಕಾರ ಕೈಯಲ್ಲಿ ದೀಪ ಹಿಡಿದು ಕಳ್ಳನನ್ನು ಹುಡುಕುತ್ತಾ ಕೋಣೆಯೊಳಗೆ ಬಂದನು. ಮಗ ಅವಿತಿದ್ದ ಪೆಟ್ಟಿಗೆಯ ಬಾಯಿಯನ್ನು ತೆರೆದನು, ತಕ್ಷಣ ಮಗ ಸಾಹುಕಾರನ ಮೇಲೆ ಆಕ್ರಮಣ ಮಾಡಿ, ದೀಪವನ್ನು ಆರಿಸಿ, ಸುರಂಗದೆಡೆಗೆ ಓಡಿದ. ಸಾಹುಕಾರ ಆತನನ್ನು ಅಟ್ಟಿಸಿಕೊಂಡು ಓಡಿದ. ಮಿಂಚಿನ ವೇಗದಲ್ಲಿ ಓಡಿದ ಮಗ ಸುರಂಗದೊಳಗೆ ಇಳಿದು, ಸುರಂಗದಿಂದ ಹೊರಬಂದ ಮೇಲೆ, ಪಕ್ಕದಲ್ಲಿ ಇದ್ದ ಭಾವಿಯಲ್ಲಿ ದೊಡ್ಡದೊಂದು ಕಲ್ಲನ್ನು ದೂಡಿದ, ಭಾವಿಯಲ್ಲಿ ಬಿದ್ದ ಕಲ್ಲು ದೊಪ್ಪನೆ ಸದ್ದು ಮಾಡಿದ್ದನ್ನು ಕೇಳಿದ ಸಾಹುಕಾರ ಕಳ್ಳ ಭಾವಿಯಲ್ಲಿ ಬಿದ್ದನೆಂದು, ಅಂಥಾ ಆಳವಾದ ಭಾವಿಯಲ್ಲಿ ಬಿದ್ದವನು ಉಸಿರುಗಟ್ಟಿ ಸತ್ತಿರಬೇಕು ಎಂದು ಕೊಂಡು ಮನೆಗೆ ವಾಪಸ್ಸು ಬಂದು ಬಾಗಿಲು ಭದ್ರಮಾಡಿ ಮಲಗಲು ತೆರಳಿದ.

ಮನೆಗೆ ಮರಳಿದ ಮಗನನ್ನು ಕಂಡ ಅಪ್ಪನಿಗೆ ಬಹಳ ಸಂತೋಷವಾಯಿತು. ಆದರೆ ಮಗ ಇನ್ನು ಕೊಪದಲ್ಲೇ ಇದ್ದು, “ನೀನು ಯಾಕೆ ಹಾಗೆ ಕಿರುಚಿ ಕೊಂಡೆ, ನನ್ನನ್ನ ಪೋಲಿಸಿಗೆ ಹಿಡಿದು ಕೊಡಲೆಂದೇ?” ಎಂದು ಕೇಳಿದ.
ಅದಕ್ಕೆ ಅಪ್ಪ, “ಮಗು ನಿನಗೆ ಕಳ್ಳತನವನ್ನು ಕಲಿಸಲು ಹಾಗೆ ಮಾಡಿದೆ, ನಿನಗೆ ಅಭಿನಂದನೆಗಳು, ಇನ್ನು ಮುಂದೆ ನಿನ್ನ ಬಗ್ಗೆ ನನಗೆ ಚಿಂತೆಯಿಲ್ಲ, ನೀನು ನಿನ್ನ ಕಾಲ ಮೇಲೆ ನಿಲ್ಲಬಲ್ಲೆ ಎಂಬ ಭರವಸೆ ಇಂದು ನನಗೆ ಬಂತು” ಎಂದನು.

Categories: ಇತರೆ
  1. jai
    July 9, 2009 at 8:43 am | #1

    bindaas story with an interesting theme….

  2. balaglobal
    July 9, 2009 at 12:09 pm | #2

    Jai,
    ಮೆಚ್ಚುಗೆಗೆ ಧನ್ಯವಾದಗಳು

  3. radha, malur
    August 19, 2009 at 10:00 am | #3

    Kevala Helikeinda enu kaliyalu sadhyavilla anubhavadinada matra enannadaru kaliyalu sadhya

  4. balaglobal
    August 19, 2009 at 12:08 pm | #4

    ರಾಧಾ ಅವರೆ,
    ಮೆಚ್ಚುಗೆಗೆ ಧನ್ಯವಾದಗಳು.

  5. September 13, 2009 at 9:31 am | #5

    radha,

  6. September 13, 2009 at 9:34 am | #6

    life is very importent pleas, take other reason

  1. No trackbacks yet.